ಮನದ ಹಾಳೆಯ ತುಂಬಾ ನೀನಿಟ್ಟ ಹೆಜ್ಜೆಯ ಗುರುತು
ತೊರೆದು ಹೋಗದಿರು ನನ್ನ ನೀ ಮರೆತು
ನಾನೇನನೂ ಅರಿಯೆ ನಿನ್ನ ಪ್ರೀತಿಯ ಹೊರೆತು
ಬಾಳು ನನ್ನೊಂದಿಗೆ ನನ್ನ ಪ್ರೀತಿಯ ಅರಿತು
ಜೊತೆಯಲಿ ನೀನಿರೆ , ಎಂಥ ಹಿತ ಈ ಇರುಳು
ಮನದ ಮೇಲೆಲ್ಲಾ ಚುಕ್ಕೆಯ ಸಾಲು
ಎದೆಯ ಬಾಂದಳದ ತುಂಬಾ ಪ್ರೀತಿಯ ಬೆಳದಿಂಗಳು
ಸುತ್ತಲು ಬೆಳಕು , ಚೆಲ್ಲಿದಂತೆ ಹಾಲು
ಪುಟದ ತುಂಬೆಲ್ಲ ಕೇವಲ ನಿನ್ನದೇ ಹೆಸರು
ಈ ನಿನ್ನ ನೆನಪುಗಳು ಸದಾ ಹಚ್ಚ ಹಸಿರು
ಯಾವುದ ಮರೆತರೂ ಮರೆಯಲಾಗುವುದೇ ಉಸಿರು
ಹಸಿರು ಉಸಿರಾಗಿ ನೀ ಎಂದೂ ನನ್ನ ಜೊತೆಯಿರು
... ಪ್ರವಿ
ಲಲಿತ ಪ್ರಬಂಧ 'ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'
-
🌸ನನ್ನ ಲಲಿತ ಪ್ರಬಂಧ 'ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'
ಡಿಸೆಂಬರ್2025ರ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ🌼
'ಮಯೂರ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು❤️...
2 days ago

1 comment:
Thumbane chennagidhe praveen...
Post a Comment