ತೋಚಿದ ಗೀಚುತ್ತೇನೆ
ಪ್ರಾಸ ಹಾಕಿ
ಉಳಿಯಬಾರದಲ್ಲ ಭಾವಗಳು
ಹಾಗೆ ಬಾಕಿ !
ನಾ ಕವಿಯಲ್ಲ
ನೀ ಬಾಚಿಕೊಟ್ಟ ಪ್ರೀತಿಯೆಲ್ಲಾ
ಇಲ್ಲಿ ಕವನ
ಒಣ ನೆಲದಲ್ಲೂ , ಮನದಲ್ಲೂ
ಹಸಿರ ವನ !
ನಾ ಕವಿಯಲ್ಲ
ಎಲ್ಲ ಸಿಕ್ಕರೆ ಬಾಳು ನಕ್ಕರೆ
ಕವನದಲ್ಲೂ ಸಕ್ಕರೆ
ನಲ್ಲೆ ನೀನು ತೊರೆದರೆ
ಬರಹದಲ್ಲೂ ತೊಂದರೆ
ಕಹಿಯೇ ಅಲ್ಲೂ , ನಾ ಖರೆ
ನಾ ಕವಿಯಲ್ಲ
ಭಾವನೆ ಉಕ್ಕಿದಾಗ
ಲೇಖನಿ ಬಿಕ್ಕುತ್ತದೆ
ದುಃಖಕ್ಕೆ ಹರಿದದ್ದು ಕಣ್ಣೀರು
ಮತ್ತು ಖುಷಿಗೆ ಪನ್ನೀರು !
................................. ಪ್ರೀತಿಯಿಂದ ಪ್ರವಿ
(ಸಂಪದ ಸಾಲು ಪತ್ರಿಕೆಯ ಈ ತಿಂಗಳ ಕವನ )