( ಮೊದಲೇ ಬರೆದಿದ್ದ ಕವನ , ಎಲ್ಲೂ ಪೋಸ್ಟ್ ಮಾಡಿರಲಿಲ್ಲ .. ಈ ತಿಂಗಳ ಸಂಪದ ಸಾಲು ಪತ್ರಿಕೆಯಲ್ಲಿ )
ಅನಾಯಾಸವಾಗಿ ನೀ ಹೊರಟೆ
ಅನಿವಾರ್ಯವಾಗಿ ನಾ ಬಿಟ್ಟೆ
ಅಣ್ಣನಿಗೆ ಹೆಜ್ಜೆ
ಅತ್ತಿಗೆಗೆ ನೆರಳು
ಕಟ್ಟಿಕೊಂಡವಳ ಜೊತೆ ಉಳಿದದ್ದು ಮಾತ್ರ
ಕತ್ತಿನಲ್ಲಿದ್ದ ತಾಳಿ
ಮತ್ತೆ ..
ಬೆಟ್ಟದಷ್ಟು ಜವಾಬ್ದಾರಿ !
ಕಂಡ ಸಾವಿರ ಕನಸ
ಕರುಣೆಯಿಲ್ಲದೇ ಕೊಂದೆ
ಕೇಳುವ ಕಿವಿಯೇ ದೂರ
ಸರಿದ ಮೇಲೆ ಮನ ಮೌನ
ಸುಮ್ಮನೆ ಮುಚ್ಚಿಕೊಂಡೆ !
ಎದ್ದಾಗ ಎದುರಿಲ್ಲ
ಬಿದ್ದಾಗ ಬಲವಿಲ್ಲ
ಕುದ್ದಾಗ ತಂಪಿಲ್ಲ
ಸರಸ , ಸಲ್ಲಾಪ ... ಪಾಪ !
ಭಾವಕ್ಕೆ , ಭೋಗಕೆ ಬೀಗ
ಅಳುವಂತಿಲ್ಲ , ಆಡುವಂತಿಲ್ಲ
ಇದ್ಯಾವ ತ್ಯಾಗ ?
ಅದ್ಯಾವ ಪುರುಷಾರ್ಥ !
ಅದ್ಯಾವ ಪುರುಷತ್ವ
ಬೇಕೆನಿಸಲಿಲ್ಲವೇ ಸಹವಾಸ
ಸಾಕೆನಿಸಿತೇ ಸಾಮಿಪ್ಯ ?
ನಿನಗೆ ಬರೀ ಹದಿನಾಲ್ಕು
ಕಾದು ಬೂದಿಯಗುತಿದೆ ಭಾವ
ಉಳಿಯುವುದು ಬರೀ ಜೀವ !
ನನಗೆ ಪೂರ್ತಿ ವನವಾಸ
ನೀ ಬಂದ ನಂತರವೂ !
ಮೋಸ ....
ಕಿವಿಯಲ್ಲಿ ಕಾದ ಸೀಸ
ಹುಸಿಯಾದ ಆ ವೇದ ಘೋಷ
ಧರ್ಮೆಚ, ಅರ್ಥೇಚ , ಕಾಮೇಚ
ನಾತಿ ಚರಾಮಿ !
ಬಾಯ್ದೆರೆದು ನುಂಗಬಾರದೇ ಭೂಮಿ !!
................................................................ಪ್ರವಿ !
ಅನಾಯಾಸವಾಗಿ ನೀ ಹೊರಟೆ
ಅನಿವಾರ್ಯವಾಗಿ ನಾ ಬಿಟ್ಟೆ
ಅಣ್ಣನಿಗೆ ಹೆಜ್ಜೆ
ಅತ್ತಿಗೆಗೆ ನೆರಳು
ಕಟ್ಟಿಕೊಂಡವಳ ಜೊತೆ ಉಳಿದದ್ದು ಮಾತ್ರ
ಕತ್ತಿನಲ್ಲಿದ್ದ ತಾಳಿ
ಮತ್ತೆ ..
ಬೆಟ್ಟದಷ್ಟು ಜವಾಬ್ದಾರಿ !
ಕಂಡ ಸಾವಿರ ಕನಸ
ಕರುಣೆಯಿಲ್ಲದೇ ಕೊಂದೆ
ಕೇಳುವ ಕಿವಿಯೇ ದೂರ
ಸರಿದ ಮೇಲೆ ಮನ ಮೌನ
ಸುಮ್ಮನೆ ಮುಚ್ಚಿಕೊಂಡೆ !
ಎದ್ದಾಗ ಎದುರಿಲ್ಲ
ಬಿದ್ದಾಗ ಬಲವಿಲ್ಲ
ಕುದ್ದಾಗ ತಂಪಿಲ್ಲ
ಸರಸ , ಸಲ್ಲಾಪ ... ಪಾಪ !
ಭಾವಕ್ಕೆ , ಭೋಗಕೆ ಬೀಗ
ಅಳುವಂತಿಲ್ಲ , ಆಡುವಂತಿಲ್ಲ
ಇದ್ಯಾವ ತ್ಯಾಗ ?
ಅದ್ಯಾವ ಪುರುಷಾರ್ಥ !
ಅದ್ಯಾವ ಪುರುಷತ್ವ
ಬೇಕೆನಿಸಲಿಲ್ಲವೇ ಸಹವಾಸ
ಸಾಕೆನಿಸಿತೇ ಸಾಮಿಪ್ಯ ?
ನಿನಗೆ ಬರೀ ಹದಿನಾಲ್ಕು
ಕಾದು ಬೂದಿಯಗುತಿದೆ ಭಾವ
ಉಳಿಯುವುದು ಬರೀ ಜೀವ !
ನನಗೆ ಪೂರ್ತಿ ವನವಾಸ
ನೀ ಬಂದ ನಂತರವೂ !
ಮೋಸ ....
ಕಿವಿಯಲ್ಲಿ ಕಾದ ಸೀಸ
ಹುಸಿಯಾದ ಆ ವೇದ ಘೋಷ
ಧರ್ಮೆಚ, ಅರ್ಥೇಚ , ಕಾಮೇಚ
ನಾತಿ ಚರಾಮಿ !
ಬಾಯ್ದೆರೆದು ನುಂಗಬಾರದೇ ಭೂಮಿ !!
................................................................ಪ್ರವಿ !