ಮನದ ಹಾಳೆಯ ತುಂಬಾ ನೀನಿಟ್ಟ ಹೆಜ್ಜೆಯ ಗುರುತು
ತೊರೆದು ಹೋಗದಿರು ನನ್ನ ನೀ ಮರೆತು
ನಾನೇನನೂ ಅರಿಯೆ ನಿನ್ನ ಪ್ರೀತಿಯ ಹೊರೆತು
ಬಾಳು ನನ್ನೊಂದಿಗೆ ನನ್ನ ಪ್ರೀತಿಯ ಅರಿತು
ಜೊತೆಯಲಿ ನೀನಿರೆ , ಎಂಥ ಹಿತ ಈ ಇರುಳು
ಮನದ ಮೇಲೆಲ್ಲಾ ಚುಕ್ಕೆಯ ಸಾಲು
ಎದೆಯ ಬಾಂದಳದ ತುಂಬಾ ಪ್ರೀತಿಯ ಬೆಳದಿಂಗಳು
ಸುತ್ತಲು ಬೆಳಕು , ಚೆಲ್ಲಿದಂತೆ ಹಾಲು
ಪುಟದ ತುಂಬೆಲ್ಲ ಕೇವಲ ನಿನ್ನದೇ ಹೆಸರು
ಈ ನಿನ್ನ ನೆನಪುಗಳು ಸದಾ ಹಚ್ಚ ಹಸಿರು
ಯಾವುದ ಮರೆತರೂ ಮರೆಯಲಾಗುವುದೇ ಉಸಿರು
ಹಸಿರು ಉಸಿರಾಗಿ ನೀ ಎಂದೂ ನನ್ನ ಜೊತೆಯಿರು
... ಪ್ರವಿ
ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಕದನ ಕುತೂಹಲ...!'
-
https://www.facebook.com/share/p/1En7E9Ecir/
👆ವಿಶ್ವವಾಣಿ'ಯ 'ವಿರಾಮ'ದಲ್ಲಿ
'ಕದನ ಕುತೂಹಲ...!'
ಏಪ್ರಿಲ್19ರಂದು ಪ್ರಕಟವಾಗಿದ್ದು ನಿಮ್ಮ ಮುಂದಿದೆ. ಓದಿ ಪ್ರತಿಕ್ರಿಯಿಸಿ...
1 week ago

1 comment:
Thumbane chennagidhe praveen...
Post a Comment